Bharadwaj

Friendship Makes Life Beautiful....................!

ಕನ್ನಡದ ಗಾದೆ ಮಾತುಗಳು

. ಅಡಕೆಗೆ ಹೋದ ಮಾನ ಆನೆ ಕೊಟ್ಟರೂ ಬರದು.
.ಯುದ್ಧ  ಕಾಲದಲ್ಲಿ  ಶಸ್ತ್ರಾಭ್ಯಾಸ ....
.ಗಿಡವಾಗಿ  ಬಗ್ಗದು  ಮರವಾಗಿ  ಬಗ್ಗೀತೆ ?
. ಬೆಳೆಯುವ  ಪೈರು  ಮೊಳಕೆಯಲ್ಲಿ .

. ಕತ್ತೆಗೆ  ಏನ್  ಗೊತ್ತು  ಕಸ್ತೂರಿ  ಗಂಧ ?


. ಶಂಖದಿಂದ ಬಂದ್ರೆನೆ  ತೀರ್ಥ ..


. ಕೈ  ಕೆಸರಾದರೆ  ಬಾಯಿ  ಮೊಸರು ..
ವೇದ ಸುಳ್ಳಾದರೂ ಗಾದೆ ಸುಳ್ಳಾಗದು..


." ಮಾತು ಆಡಿದರೆ ಹೋಯಿತು.. ಮುತ್ತು ಒಡೆದರೆ  ಹೋಯಿತು "...
. .ಅಣ್ಣ  ನಮ್ಮವನದ್ರೆ  ಅತ್ತಿಗೆ  ನಮ್ಮವಳೇ .


೧೦ .ಅಕ್ಕನ  ಮೇಲೆ  ಅಸೆ  ಅಕ್ಕಿ  ಮೇಲೆ ಇಷ್ಟ .


೧೧. ನಾಡಿನುದ್ದ   ಕಬ್ಬು  ಎದೆ ಉದ್ದ ಸಲ  (ಮಂಡ್ಯ ಗಾಧೆ).
೧೨. ಹಾಡಿ ಹಾಡಿ ರಾಗ ಉಗುಳಿ ಉಗುಳಿ ರೋಗ.
೧೩.ಬೆಂಕಿ  ಬಿದ್ದ ಮೇಲೆ ಬಾವಿ ತೋಡಿದ್ರಂತೆ.
೧೪.ಕುಣಿಯಲು ಬರದವಗೆ ಅಂಗಳ ಡೊಂಕು.
೧೫.ಮಳ್ಳಿ ಮಳ್ಳಿ ಮಂಚಕ್ ಎಷ್ಟು ಕಾಲು ಅಂದರೆ ಮೂರು ಮತ್ತೊಂದು ಅಂದಳಂತೆ.
೧೬. ಸಂಕಟ ಬಂದಾಗ ವೆಂಕಟರಮಣ


೧೭. ದೂರದ ಬೆಟ್ಟ ನುಣ್ಣಗೆ


೧೮.ಊರಿಗೆ ಬಂದವರು ನೀರಿಗೆ ಬರದೆ ಇರುತ್ತಾರ?
೧೯. ಕೋಳಿ ಕೇಳಿ ಮಸಾಲೆ ಅರಿಬೇಕಾ..


೨೦.ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡೆಸಿತಂತೆ"...


೨೧. ಚಿಂತೆ  ಇಲ್ಲದವ  ಸಂತೆಯಲ್ಲಿ  ನಿದ್ದೆ  ಮಾಡಿದನಂತೆ !
೨೨.ಎತ್ತು  ಏರಿಗೆಳದರೆ  ಕೋಣ  ನೀರಿಗೆ ಎಲಿತಂತೆ.
೨೩."ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು"... 
೨೪.ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು...


೨೫.ಬೆಳ್ಳಗಿರುವುದೆಲ್ಲಾ ಹಾಲಲ್ಲ... 
೨೬.ತುಂಟತನದವ  ಮಂಟಪದಲ್ಲಿ  ಕೂತರು  ತಂಟೆ ಬಿಡಲಾರ .  
27.
ಅಕ್ಕಿ ಖರ್ಚಾಗ  ಬರದು  ಅಕ್ಕನ  ಮಕ್ಕಳು  ಬಡವಾಗ  ಬಾರದು


28.ಅಕ್ಕನ ಚಿನ್ನವಾದರು  ಅಕ್ಕಸಾಲಿಗ  ಬಿಡ .


29.ಕೋಣನ  ಮುಂದೆ  ವೀಣೆ  ನುಡಿಸಿದಂತೆ .


೩೦  .ಕತ್ತೆಗೆ  ಗೊತ್ತೆ  ಕಸ್ತೂರಿಯ  ಪರಿಮಳ .


೩೧ . ಮಂಗನ  ಕೈಯಲ್ಲಿ  ಮಾಣಿಕ್ಯ  ಕೊಟ್ಟಂತೆ
೩೨. ಕೋಣನ ಮುಂದೆ ಕಿಂದರಿ ಬಾರಿಸೋದು.
೩೩. ಮಾತು ಮನೆ ಕೆಡಿಸ್ತು ತೂತು ಓಲೆ ಕೆಡಿಸ್ತು .
೩೪. ಗಂಗಾಸ್ನಾನ, ತುಂಗಾಪಾನ.



35. ಅಡಿಕೆ  ಕದ್ರು   ಕಳ್ಳ  ಆನೆ  ಕದ್ರು  ಕಳ್ಳ.
೩೬. ಮಾತು  ಬೆಲ್ಲಿಯದ್ರೆ  ಮೌನ   ಬಂಗಾರ.
೩೭ . ಬರ್ತಾ ಬರ್ತಾ ರಾಯರ ಕುದುರೆ ಕತ್ತೆ ಆಯ್ತು.
೩೭.ಹೆಣ್ಣು ಅತ್ತರೆ ಕಣ್ಣೀರು ಮೃತ್ಯು .
೩೮. ಗರಗಸದ ಬಾಯಿಗೆ ಮರ ಬಿದ್ದ ಹಾಗೆ.
೩೯. *ಅಗ್ಗದ  ಗಂಡನಿಗೆ ಮೂಸರಲ್ಲು ಕಲ್ಲು. !
೪೦.*ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ .
೪೧. ಕಾಡು ಬಾ ಅನ್ನುತ್ತೆ... ಊರು ಹೋಗು ಅನ್ನುತ್ತೆ.
೪೩.ಮಾತು ಮನೆ ಕೆಡಸ್ತು, ತೂತು ಒಲೆ ಕೆಡಸ್ತು.
೪೪.ಪಾಲಿಗೆ  ಬಂದಿದ್ದು  ಪಂಚಾಮೃತ .
೪೬.ಹಾಸಿಗೆ  ಇದ್ದಷ್ಟು  ಕಾಲು  ಚಾಚು.

0 comments:

Post a Comment